
ಮಂಡ್ಯದಲ್ಲಿ 87ನೇ ಅಖಿಲ ಭಾರತ ನಡೆಯಲಿದೆ ಕನ್ನಡ ಡಿಸೆಂಬರ್ 20 ರಿಂದ ಮೂರು ದಿನಗಳ ಕಾಲ ಸಾಹಿತ್ಯ ಸಮ್ಮೇಳನ
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ೧೯೭೨ರಲ್ಲಿ ಅಧಿಕೃತವಾಗಿ ನೋಂದಾಯಿಸಲ್ಪಟ್ಟ ಸಂಸ್ಥೆಯಾಗಿ ಇಡೀ ರಾಜ್ಯದ ವಿಪ್ರ ಸಮಾಜದ ಧ್ವನಿಯಾಗಿ ರೂಪುಗೊಂಡಿದೆ.
ಬ್ರಾಹ್ಮಣ ಸಂಸ್ಥೆಯ ಮೂರು ಸೂತ್ರಗಳಾದ ಸಂಘಟನೆ, ಸ್ವಾವಲಂಬನೆ ಮತ್ತು ಸಂಸ್ಕಾರದ ಆಧಾರದ ಮೇಲೆ ತನ್ನ ಕಾರ್ಯಚಟುವಟಿಕೆಯನ್ನು ಇಡೀ ರಾಜ್ಯದಲ್ಲಿ ವಿಸ್ತರಿಸಿದೆ. ಇದುವರೆಗೆ ರಾಜ್ಯಮಟ್ಟದ ೧೦ ಸಮ್ಮೇಳನಗಳನ್ನು ಏರ್ಪಾಟು ಮಾಡಿದ್ದು, ರಾಜ್ಯಾದ್ಯಂತ ವಿಪ್ರ ಸಂಘಟನೆಯನ್ನು ಚುರುಕುಗೊಳಿಸಿ, ವಿವಿಧ ಜಿಲ್ಲೆಗಳಲ್ಲಿ ಹಲವಾರು ಆರ್ಥಿಕ ಸಂಸ್ಥೆಗಳು, ಕಲ್ಯಾಣ ಮಂಟಪಗಳು ಮತ್ತು ಹಲವು ಕಾರ್ಯಕ್ರಮಗಳನ್ನು ರೂಪಿಸಿಕೊಳ್ಳಲು ಸಹಕಾರ ನೀಡಿದೆ.
ಈಗಾಗಲೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು ೩೦,೦೦೦ ಚ.ಅ. ನಾಗರೀಕ ಸೌಲಭ್ಯ ನಿವೇಶನವನ್ನು ಪಡೆದು, ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ವಿದ್ಯಾಭ್ಯಾಸಕ್ಕೆ ಆಗಮಿಸುವ ವಿಪ್ರ ಮಹಿಳೆಯರಿಗೆ ಅನುಕೂಲವಾಗುವಂತೆ “ವಿದ್ಯಾವಾಸಿನಿ ವಿಪ್ರ ಮಹಿಳಾ ವಿದ್ಯಾರ್ಥಿನಿ ನಿಲಯ” ವನ್ನು ಸ್ಥಾಪಿಸಲಾಗಿದೆ. ಈ ವಿದ್ಯಾರ್ಥಿನಿ ನಿಲಯ ಕಟ್ಟಡಕ್ಕೆ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪನವರು ೨.೦೦ ಕೋಟಿ ರೂ.ಗಳ ಅನುದಾನವನ್ನು ನೀಡಿರುತ್ತಾರೆ. ಈ ನಿಲಯದಲ್ಲಿ ಪ್ರಸ್ತುತ ೧೫೦ ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅವಕಾಶವನ್ನು ಪಡೆದಿರುತ್ತಾರೆ. ವಿದ್ಯಾರ್ಥಿನಿಯರ ಜ್ಞಾನಾರ್ಜನೆಗೆ ನೆರವಾಗಲು ಅತೀ ಕಡಿಮೆ ಶುಲ್ಕದಲ್ಲಿ ಊಟೋಪಚಾರ ಹಾಗೂ ವಸತಿ ಸೌಕರ್ಯವನ್ನು ನಿಲಯದಲ್ಲಿ ಏರ್ಪಾಟು ಮಾಡಲಾಗಿದೆ. ಸುಮಾರು ೪೨ ಕೊಠಡಿಗಳಿಗೆ ದಾನಿಗಳು ಪ್ರಾಯೋಜಕರಾಗಿ ಧನಸಹಾಯ ಮಾಡಿರುತ್ತಾರೆ. ಇದೇ ನಿವೇಶನದಲ್ಲಿ ಉಳಿದ ಭಾಗದಲ್ಲಿ ಅತ್ಯಾಧುನಿಕ ಸಭಾಂಗಣ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಬೆಂಗಳೂರಿಗೆ ಆಗಮಿಸುವ ವಿಪ್ರಬಂಧುಗಳಿಗೆ ವಿಪ್ರ ವಸತಿ ನಿಲಯವನ್ನು ನಿರ್ಮಾಣ ಮಾಡುವ ಕೆಲಸವನ್ನು ಸದ್ಯದಲ್ಲೇ ಕೈಗೆತ್ತಿಕೊಳ್ಳಲಾಗುತ್ತಿದೆ.

ಕರ್ನಾಟಕದಾದ್ಯಂತ ನೆಲೆಸಿರುವ ತ್ರಿಮತಸ್ಥ ಬ್ರಾಹ್ಮಣರೆಲ್ಲ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ಎಂಬ ರಾಜ್ಯ ಮಟ್ಟದ ಸಂಘಟನೆಯಲ್ಲಿ ಒಂದೇ ಸೂರಿನಡಿ ಭಾಗಿಯಾಗಿ ಸಮಸ್ತ ಬ್ರಾಹ್ಮಣ ಸಮುದಾಯವನ್ನು ಪ್ರಸ್ತುತ ಮತ್ತು ಮುಂದೆ ಬರುವ ಸವಾಲುಗಳನ್ನು ಧೈರ್ಯವಾಗಿ ಎದುರಿಸಲು ಸಂಘಟಿಸುವುದು.

ಕರ್ನಾಟಕದ ವಿಪ್ರ ಸಮುದಾಯದ ಪ್ರತಿ ವ್ಯಕ್ತಿಯು ಸ್ವಾವಲಂಭಿ ಜೀವನ ನಡೆಸುವಲ್ಲಿ ಸಹಾಯ ಮಾಡುವುದು.

ಶರವೇಗದ ಬದಲಾವಣೆಗೆ ಹೊಂದಿಕೊಂಡಿರುವ ಬ್ರಾಹ್ಮಣ ಸಮಾಜ ಕೆಲವೊಮ್ಮೆ ಹಿರಿಯರಿಂದ ಹಾಗು ಅನಾದಿ ಕಾಲದಿಂದ ಬಂದಂತ ವೈದಿಕ ಪರಂಪರೆಯನ್ನು , ಮಾರ್ಗದರ್ಶಕರ ಕೊರತೆಯಿಂದಾಗಿ , ಸಮಯದ ಕೊರತೆಯಿಂದಾಗಿ , ಆರ್ಥಿಕ ಹಾಗು ಹಲವು ಸಾಮಾಜಿಕ ಸವಾಲುಗಳಿಂದಾಗಿ ಪಾಲಿಸಲಾಗದೆ ಮರುಕ ಪಡುತ್ತಿದ್ದಾರೆ , ಆದ್ದರಿಂದ ವೇದಶಾಸ್ತ್ರಗಳ ಅಧ್ಯಯನಕ್ಕಾಗಲಿ ಅಥವಾ ನಿತ್ಯಕರ್ಮ ಅನುಷ್ಠಾನಕ್ಕಾಗಲಿ, ಅಥವಾ ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಪೂರಕ ವಾತಾವರಣ ನಿರ್ಮಿಸುವುದು ಕೂಡ ಮಹಾಸಭಾದ ಹೊಣೆ ಎಂದೇ ಭಾವಿಸಿ ಈ ಮೇಲಿನ ಮೂರು ಆಧಾರ ಸ್ತಂಭಗಳ ಮೇಲೆ ಮಹಾಸಭಾದ ಯೋಜನೆಗಳು ಹೊರಹೊಮ್ಮಲಿವೆ .
ಸ್ಥಳ : ಅರಮನೆ ಮೈದಾನ - 560006
5000 ಭಾಗವಹಿಸುವವರು
2 ದಿನ
200 ಮಳಿಗೆಗಳು
10 ಭಾಷಿಕರು
20 ಈವೆಂಟ್ಸ್
54 ಸೆಮಿನಾರ್ಗಳು
1972 ರಲ್ಲಿ ಸ್ಥಾಪನೆಯಾದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (AKBMS).
ಶಂಕರಪುರದ ಶಂಕರಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಜ 6 ಮತ್ತು 7 ರಂದು ಆಯೋಜಿಸಿರುವ ಅಭಿಜಾತೆ-2024-ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು...
ಹೆಚ್ಚು ಓದಿ
ಕರ್ನಾಟಕ ಬ್ರಾಹ್ಮಣ ಮಹಾಸಭಾ ಸರ್ವ ಸದಸ್ಯರ ಸಭೆ, ಅಧ್ಯಕ್ಷರ ಅವಧಿಯನ್ನು ಈಗಿನ ಮೂರು ವರ್ಷಗಳಿಂದ ಐದು ವರ್ಷಗಳಿಗೆ ಹೆಚ್ಚಿಸುವುದೂ ಸೇರಿದಂತೆ...
ಹೆಚ್ಚು ಓದಿ
ಮೈಸೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ನಗರಕ್ಕೆ ಭೇಟಿ ನೀಡಿದ ರಾಜ್ಯ ಮಾಜಿ ಅಡ್ವೊಕೇಟ್ ಜನರಲ್ ಅಶೋಕ್ ಹಾರನಹಳ್ಳಿ ನೇತೃತ್ವದಲ್ಲಿ ಬಿಜೆಪಿ ಮುಖಂಡ...
ಹೆಚ್ಚು ಓದಿ